Coffee NADU Express. Chikmagaluru

Coffee  NADU Express. Chikmagaluru ನಮ್ಮ ಶಾಲೆ ನಮ್ಮ ಹೆಮ್ಮೆ... ಸರ್ಕಾರಿ ಶಾಲೆ ಉಳಿಸೋಣ

Our school children's New uniform 😍😍
03/07/2026

Our school children's New uniform 😍😍

ದಿನಾಂಕ : 2.7.2026ಈ ದಿನ ನಮ್ಮ ಶಾಲೆಯ ಮಕ್ಕಳಿಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ನೀಡಿದ ಶಾಲಾ ಬ್ಯಾಗ್ ಸಹಿತ ಲೇಖನ ಸಾಮಗ್ರಿಗಳನ್ನು ವಿತರಿಸ...
02/07/2026

ದಿನಾಂಕ : 2.7.2026
ಈ ದಿನ ನಮ್ಮ ಶಾಲೆಯ ಮಕ್ಕಳಿಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ನೀಡಿದ ಶಾಲಾ ಬ್ಯಾಗ್ ಸಹಿತ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಶಾಲೆಯ ಸುದ್ದಿ ಪತ್ರಿಕೆಯಲ್ಲಿ...
30/06/2026

ಶಾಲೆಯ ಸುದ್ದಿ ಪತ್ರಿಕೆಯಲ್ಲಿ...

ಶಾಲೆಗೆ ವೈ ಫೈ ಹಾಕಿಸಿದ್ದು ಮಕ್ಕಳ ಹೆಚ್ಚಿನ ಕಲಿಕೆಗಾಗಿಯೇ...   ಇಂದಿನಿಂದ ಸಂಜೆ 6.30 ರಿಂದ 8 ಗಂಟೆ ವರೆಗೂ ಆನ್ಲೈನ್ ಮೂಲಕ ತರಗತಿ ಆರಂಭಿಸಲಾಗ...
29/06/2026

ಶಾಲೆಗೆ ವೈ ಫೈ ಹಾಕಿಸಿದ್ದು ಮಕ್ಕಳ ಹೆಚ್ಚಿನ ಕಲಿಕೆಗಾಗಿಯೇ...
ಇಂದಿನಿಂದ ಸಂಜೆ 6.30 ರಿಂದ 8 ಗಂಟೆ ವರೆಗೂ ಆನ್ಲೈನ್ ಮೂಲಕ ತರಗತಿ ಆರಂಭಿಸಲಾಗಿದೆ.

ದಿನಾಂಕ : 25.6.2026*ಶಾಲೆಗೆ ವೈ ಫೈ ಕೊಡುಗೆ*ನಮ್ಮ ಶಾಲೆಯಲ್ಲಿ ಪ್ರೊಜೆಕ್ಟರ್, ಲ್ಯಾಪ್ ಟಾಪ್, ಕಂಪ್ಯೂಟರ್ ಎಲ್ಲಾ ಇದೆ. ಆದರೆ ಇಂಟರ್ನೆಟ್ ಸೌಲಭ...
26/06/2026

ದಿನಾಂಕ : 25.6.2026
*ಶಾಲೆಗೆ ವೈ ಫೈ ಕೊಡುಗೆ*

ನಮ್ಮ ಶಾಲೆಯಲ್ಲಿ ಪ್ರೊಜೆಕ್ಟರ್, ಲ್ಯಾಪ್ ಟಾಪ್, ಕಂಪ್ಯೂಟರ್ ಎಲ್ಲಾ ಇದೆ. ಆದರೆ ಇಂಟರ್ನೆಟ್ ಸೌಲಭ್ಯವೇ ಇರಲಿಲ್ಲ...

ಶಾಲಾ ಮಕ್ಕಳಿಗೆ ಆನ್ಲೈನ್ ನಲ್ಲಿ ತರಗತಿ ಕೊಡಿಸಬೇಕು...
ಕಂಪ್ಯೂಟರ್ ಜ್ಞಾನ ಬೆಳೆಸಬೇಕು...
ತಂತ್ರಜ್ಞಾನ ಕಲಿಕೆ ಆಗಬೇಕು... ಎನ್ನುವುದು ನಮ್ಮ ಬಹು ವರ್ಷಗಳ ಕನಸು...

ನಮ್ಮ ಕನಸಿಗೆ ಪುಷ್ಟಿಕೊಟ್ಟು ಸಹಕರಿಸಿದವರು ಬೆಂಗಳೂರಿನ ಅವಿರತ ಫೌಂಡೇಶನ್ ನ ಸತೀಶ್ ಸರ್ ಅವರು...

ನಮ್ಮ *ಶಾಲೆಯ ಮಕ್ಕಳ ಆನ್ಲೈನ್ ಕಲಿಕೆ ಮತ್ತು ತಂತ್ರಜ್ಞಾನದ ಕಲಿಕೆಗೆ* ಸಹಕಾರಿಯಾಗಲು ಸುಮಾರು 12,000 ವೆಚ್ಚದಲ್ಲಿ *WiFi* ಹಾಕಿಸಿ ಕೊಟ್ಟಿದ್ದಾರೆ.

ಇವರಿಗೆ ಶಾಲೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏🌹🙏

ನಮ್ಮ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸುದ್ದಿ ದಿನಪತ್ರಿಕೆಯಲ್ಲಿ...
23/06/2026

ನಮ್ಮ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸುದ್ದಿ ದಿನಪತ್ರಿಕೆಯಲ್ಲಿ...

ದಿನಾಂಕ : 22.6.2026 *ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯ ಮಕ್ಕಳಿಗೆ ಸುಮಾರು 15 ಸಾವಿರ ರೂಪಾಯಿ ವೆಚ್ಚದಲ್ಲಿ ಟೀ ಶರ್ಟ್ ಮತ್ತು ಟ್ರ್ಯಾಕ...
22/06/2026

ದಿನಾಂಕ : 22.6.2026

*ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯ ಮಕ್ಕಳಿಗೆ ಸುಮಾರು 15 ಸಾವಿರ ರೂಪಾಯಿ ವೆಚ್ಚದಲ್ಲಿ ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಸಮವಸ್ತ್ರವನ್ನು ಶ್ರೀಯುತ ಗಿರೀಶ್, ಇನ್ಸಪೆಕ್ಟರ್, ಮೈಸೂರು ಇವರು ಕೊಡಿಸಿದ್ದಾರೆ.*

*ಇವರಿಗೆ ಶಾಲೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏🌹🙏*

ನಮ್ಮ ಶಾಲೆಯಲ್ಲಿ 12 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.  ಮಕ್ಕಳು ಓಂಕಾರ, ಶಾಂತಿ ಮಂತ್ರದೊಂದಿಗೆ ಯೋಗಾಭ್ಯಾಸ...
21/06/2026

ನಮ್ಮ ಶಾಲೆಯಲ್ಲಿ 12 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳು ಓಂಕಾರ, ಶಾಂತಿ ಮಂತ್ರದೊಂದಿಗೆ ಯೋಗಾಭ್ಯಾಸವನ್ನು ಪ್ರಾರಂಭಿಸಿ... ವಿವಿಧ ಆಸನಗಳನ್ನು, ಪ್ರಾಣಾಯಾಮ, ಮನಸ್ಸಿನ ಏಕಾಗ್ರತೆಗೆ ಧ್ಯಾನದ ಅಭ್ಯಾಸವನ್ನು ಮಾಡಿಸಲಾಯಿತು.

ಪ್ರತಿ ಶನಿವಾರ ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಇಂದು ಮಕ್ಕಳಿಗೆ ವಿವಿಧ ಆಸನಗಳ ಜೊತೆಗೆ ಪ್ರಾಣಾಯಾಮ, ಧಾನ್ಯವನ್ನು ಅಭ್ಯಾಸ ಮಾಡಿಸಲಾಯಿತು. ನಮ್ಮ ಶಾಲೆಯಲ್ಲಿ ಪ್ರತಿವರ್ಷವೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಳವಾಗಿ, ಸಂಭ್ರಮದಿಂದ ಆಚರಿಸಲಾಯಿತು.

ದಿನಾಂಕ : 20.6.2026ಇಂದು ಜೂನ್ ತಿಂಗಳ ಮೂರನೇ ಶನಿವಾರ...      ಶಾಲೆಗಳಲ್ಲಿ ಸಂಭ್ರಮ ಶನಿವಾರ ಆಚರಣೆ.  ವಿಷಯ " ವಿಶೇಷ ಚೇತನ ವ್ಯಕ್ತಿಗಳೊಂದಿಗ...
20/06/2026

ದಿನಾಂಕ : 20.6.2026
ಇಂದು ಜೂನ್ ತಿಂಗಳ ಮೂರನೇ ಶನಿವಾರ...

ಶಾಲೆಗಳಲ್ಲಿ ಸಂಭ್ರಮ ಶನಿವಾರ ಆಚರಣೆ. ವಿಷಯ " ವಿಶೇಷ ಚೇತನ ವ್ಯಕ್ತಿಗಳೊಂದಿಗೆ ಸಂವಹನ ".

ಆದರೆ ನಮ್ಮ ಶಾಲಾ ವ್ಯಾಪ್ತಿಯಲ್ಲಿ ವಿಶೇಷ ಚೇತನ ವ್ಯಕ್ತಿಗಳು ಇಲ್ಲದೆ ಇರುವುದರಿಂದ ಮಕ್ಕಳೊಂದಿಗೆ ವಿಶೇಷ ಚೇತನ ವ್ಯಕ್ತಿಗಳ ಪರಿಚಯ, ಅವರಿಗಾಗುವ ತೊಂದರೆಗಳು, ಅವರ ಜೊತೆ ನಮ್ಮ ನಡವಳಿಕೆ.... ಈ ಕುರಿತು ಅರಿವು ಮೂಡಿಸಲಾಯಿತು.

ಹಾಗೆಯೇ ಮಕ್ಕಳ ಕಣ್ಣಿಗೆ ಬಟ್ಟೆಯನ್ನು ಕಟ್ಟಿ... ಮಕ್ಕಳು ಕನ್ನಡ - ಇಂಗ್ಲಿಷ್ ಅಕ್ಷರ ಗುರುತಿಸುವ, ಪ್ರಾಣಿಗಳು, ಪಕ್ಷಿಗಳು, ವಾಹನಗಳನ್ನು ಗುರುತಿಸುವ ವಿಶೇಷ ಚಟುವಟಿಕೆಯನ್ನು ಆಯೋಜಿಸಿ ವಿಶೇಷ ಚೇತನ ವ್ಯಕ್ತಿಗಳ ಅನುಭವ ನೀಡಲಾಯಿತು.

ಈ ಚಟುವಟಿಕೆಯಲ್ಲಿ ಎಲ್ಲಾ ಮಕ್ಕಳು ಬಹಳ ಆಸಕ್ತಿಯಿಂದ ಭಾಗವಹಿಸಿದರು.

ದಿನಾಂಕ : 19.6.2026ಚಿಕ್ಕಮಗಳೂರು ತಾಲೂಕಿನಿಂದ 20 km ದೂರದಲ್ಲಿರುವ ಯಲಗುಡಿಗೆ ಗ್ರಾಮದಲ್ಲಿರುವ ಪುಟ್ಟ ಶಾಲೆ ನಮ್ಮದು.  *ಸರ್ಕಾರಿ ಕಿರಿಯ ಪ್ರ...
19/06/2026

ದಿನಾಂಕ : 19.6.2026

ಚಿಕ್ಕಮಗಳೂರು ತಾಲೂಕಿನಿಂದ 20 km ದೂರದಲ್ಲಿರುವ ಯಲಗುಡಿಗೆ ಗ್ರಾಮದಲ್ಲಿರುವ ಪುಟ್ಟ ಶಾಲೆ ನಮ್ಮದು.

*ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಗುಡಿಗೆ.* ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಮ್ಮ ಶಾಲೆಯಲ್ಲಿರುವ ಅಕ್ಷರಧಾಮ ಕಿಂಡರ್ ಗಾರ್ಡನ್ ಸ್ಕೂಲ್ ( Pkg / Lkg/ Ukg ) ನಲ್ಲಿ 14 ಮಕ್ಕಳು ಮತ್ತು 1 ರಿಂದ 5 ನೆಯ ತರಗತಿವರೆಗೆ 20 ಮಕ್ಕಳು ಇದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಬೀಸಿದ ಬಾರಿ ಗಾಳಿ ಮಳೆಗೆ ನಮ್ಮ *ಶಾಲೆಯ ಹೆಂಚಿನ ಮೇಲೆ ಸಿಲ್ವರ್ ಮರ ಬಿದ್ದ ಪರಿಣಾಮ...* ಹೆಂಚು ಹೊಡೆದು ಹೋಯಿತು. ತರಗತಿ ಕೊಠಡಿ ಒಳಗಿನ ತಾರಾಲಯ ಕಲ್ಪನೆಯ PVC ಸೀಲಿಂಗ್ ಹಾಳಾಯಿತು. 2000 - 01 ಸಾಲಿನ ವಿದ್ಯಾರ್ಥಿಗಳು ಶಾಲೆಗೆ ಕೊಡುಗೆಯಾಗಿ ಕೊಟ್ಟ ಸ್ವಾಮಿ ವಿವೇಕಾನಂದರ ಫೋಟೋ ಹೊಡೆದು ಹೋಯಿತು ಮತ್ತು ಟೇಬಲ್ ಗ್ಲಾಸ್ ಸಹ ಹೊಡೆದು ಹೋಗಿತ್ತು.

*2006 - 27ನೇ ಸಾಲಿಗೆ ಮಕ್ಕಳು ಶಾಲೆಗೆ ಬರುವ ಮೊದಲು ಶಾಲೆಯ ರಿಪೇರಿ ಕೆಲಸ ಮಾಡುವುದು ಪ್ರಥಮ ಆದ್ಯತೆ ಆಗಿತ್ತು.* ಈ ವಿಚಾರವನ್ನು ಇಲಾಖೆಯ ಗಮನಕ್ಕೆ ಮತ್ತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರು. ಆದರೆ ಏನು ಪ್ರಯೋಜನ ಆಗಿರಲಿಲ್ಲ.

*ಶ್ರೀಯುತ ರಂಗರಾಜನ್ ಸರ್ ಅವರನ್ನು ಕರೆ ಮಾಡಿ ವಿಷಯ ಹಂಚಿಕೊಂಡಾಗ, ಸರ್ ರವರು ವಾಸ್ತವ ಸ್ಥಿತಿಯನ್ನೇ ಅರಿತು ಸಹಾಯ ಹಸ್ತ ಚಾಚಿದರು.*

ಇಂದು ನಮ್ಮ ಶಾಲಾ ಕೊಠಡಿಯ *ಸೀಲಿಂಗ್ ರಿಪೇರಿ ಕೆಲಸ* ಆಗಿದೆ. *ಸ್ವಾಮಿ ವಿವೇಕಾನಂದರ ಫೋಟೋ ರಿಪೇರಿ* ಆಗಿದೆ, *3 ಟೇಬಲ್ ಟೇಬಲ್ ಗ್ಲಾ* ಸ್ ದೊರೆತಿದೆ, ನಮ್ಮ ಶಾಲೆಯ ಅಕ್ಷರಧಾಮ ಕಿಂಡರ್ ಗಾರ್ಡನ್ ಶಾಲೆಯ ತರಗತಿಗೆ *2 ರ್ಯಾಕ್* ಜೊತೆಗೆ ಮಕ್ಕಳ ಪುಸ್ತಕಗಳನ್ನು, ಕಲಿಕಾ ಸಾಮಗ್ರಿಗಳನ್ನು ಇಡಲು *25 ಪ್ಲಾಸ್ಟಿಕ್ ಟ್ರೇ* ಗಳನ್ನು ಕೊಡುಗೆ ದೊರೆತಿದೆ.

*ನಮ್ಮ ಶಾಲೆಯ ಶೈಕ್ಷಣಿಕ ಮತ್ತು ಭೌತಿಕ ಪ್ರಗತಿಗೆ ಸಹಕಾರ ನೀಡಿದ ಶ್ರೀಯುತ ರಂಗರಾಜನ್ ಸರ್ ಮತ್ತು ಸೌಜನ್ಯ ಸೇವಾಶ್ರಮದ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇವೆ.*🙏🌹🙏
----------------------------------------
ಮುಖ್ಯ ಶಿಕ್ಷಕರು / ಸಹ ಶಿಕ್ಷಕರು,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಲಗುಡಿಗೆ, ಚಿಕ್ಕಮಗಳೂರು ತಾಲ್ಲೂಕು.

Address

Yalagudige
Chikmagalur

Telephone

+919481721557

Website

Alerts

Be the first to know and let us send you an email when Coffee NADU Express. Chikmagaluru posts news and promotions. Your email address will not be used for any other purpose, and you can unsubscribe at any time.

Contact The Business

Send a message to Coffee NADU Express. Chikmagaluru:

Share